ಹೆಸರು:ಶಿವಕುಮಾರ (ಸ್ವಾಮಿ)
ವಯಸ್ಸು:೨೮
ವೃತ್ತಿ: ಇಂಜಿನಿಯರ್
ಈ ಚಿತ್ರ ದಲ್ಲಿ ಕಾಣ್ತಾ ಇರೋ ವ್ಯಕ್ತಿ ನೇ ಈ ಕಥೆಯ ನಾಯಕ ಅಲ್ಲ ಖಳ-ನಾಯಕ.
ನನ್ನ ಆತ್ಮ-ಚರಿತ್ರೆ ಯನ್ನ ಯಾರದ್ರು ಯಾಕೆ ಓದಬೇಕು?
ಈ ಪ್ರಶ್ನೆ ನನ್ನನ್ನು ಕಾಡುತ್ತೆ!!ಆದರೆ ಇದರ ಉತ್ತರ ಮಾತ್ರ ನನ್ನ ಬಳಿ ಇಲ್ಲ.ಇದ್ರೂ ಕೇಳಲು ಕಾಲದ ಅಭಾವ ಇದೆ.ಆದರು........
ನಾ ಹೇಳುವುದೆನಂದರೆ ಪ್ರತಿ ಒಬ್ಬರು ತಾವು ಬದುಕಿನಲ್ಲಿ ಏನ್ ಆಗ ಬಾರದೋ,ನನ್ನಿಂದ ಏನ್ ಕಲಿಬೇಕು ಅಂತ ನಾನ್ ಹೇಳ್ತೀನಿ.
ಎಲ್ಲರಿಗು ತಾವು ಚೆನ್ನಾಗಿ ಓದಿ,ದೊಡ್ಡವರಾಗಿ ಒಳ್ಳೆ ಕೆಲಸಕ್ಕೆ ಸೇರಿ ಅಪ್ಪ ಅಮ್ಮನ್ನ ಸುಖವಾಗಿ ಇಟ್ಕೋಳೋ ಆಸೆ ಇದ್ದೆ ಇರುತ್ತೆ .ಮುಂದೆ ಚಲೋ ಹುಡುಗಿನ ಮದುವೆ ಆಗಿ ಮಕ್ಳನ್ನ ಮಾಡ್ಕೊಂಡು ಹಾಯಾಗಿ ಸಂಸಾರ ಮಾಡೋದಿರುತ್ತೆ.ಇದು ಯಾವುದೇ ಸಾಮಾನ್ಯವಾದ ಮನುಷ್ಯನಿಗೆ ಇರೋ ಸಹಜವಾದ ಗುಣ.
ನಮ್ಮ ಸ್ವಾಮಿ ಯಾರ ತಂಟೆ ತಕರಾರ್ಗು ಹೋಗದೆ ಇರೋ ಅಸ್ಸಾಮಿ.ಹಾಗಂತ ಇವನು ತುಂಬ ಸಾಚನು ಅಲ್ಲ.ಮಹಾನ್ ಛತ್ರಿ ನನ್ ಮಗ.
Monday 27 April 2009
Friday 20 March 2009
Subscribe to:
Posts (Atom)